Saturday, March 23, 2024

ಮರಗಳಮಧ್ಯೆ ಮಾರ್ಮಿಕ ವಚನ- Lalbagh

 



ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
-ಜೇಡರ ದಾಸಿಮಯ್ಯ

ODalugOMDava hasiva; ODalugOMDava husiva ODalugOMDavanEMdu nInEnna jaridOmmE nuDiyadira! nInEnnaMtE OmmE ODalugOMDu noDa! rAmanAtha.

-jeDara dAsimayya


This satirical poem by a Lingayat saint-poet presents the devotee's anguished plea to the Lord: 

Yes, oh, Lord, this body entails hunger. It entails a weakness for stretching the truth. So scorn me not. Take up a body  and see for Yourself! (You are the pure spirit and thus unable to know the failings of one in flesh and blood!) 


I found this plaque nailed to a wooden post in the heavenly lung space called Lalbagh! 

I consulted also my Kavi friends and here are their responses. See the confluence of thought and word!

ಕವಿಸಹೃದಯರ ವ್ಯಾಖ್ಯಾನ
ಶ್ರೀನಾಥ ನಾರಾಯಣವಾಣೀ ಸುರೇಶ್ತಾರಾ ಮೂರ್ತಿ
ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಹಸಿವಿನ ಸಂಕಟವಾಗಲಿ ಇಲ್ಲವೇ ಸುಳ್ಳು ಹಾಗೂ ನಿಜದ ನಡುವಣ ಇಬ್ಬಗೆಯ ತೊಳಲಾಟವಾಗಲಿ ಜಡರೂಪಿಯಾದ ದೇವರಿಗಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ. ನಿಂದಾಸ್ತುತಿ.
ಓ ರಾಮನಾಥ (ಜೇಡರ ದಾಸಿಮಯ್ಯನ ದೇವರು),
ನೀನು ಜಡರೂಪಿ ದೇವ.
ನಿನಗೆ ನನ್ನ ಕಷ್ಟವೆಲ್ಲಿ ತಿಳಿಯಬೇಕು.
ಒಡಲು / ದೇಹ ಎಂದರೆ ಈ ಭೂಮಿಯ ಮೇಲೆ ದೇಹವನ್ನು ಜೀವರೂಪವನ್ನು ಹೊಂದಿದವನಿಗೆ ಅನೇಕ ಹಸಿವೆಗಳಾಗುತ್ತವೆ.
ಇಂತಹ ಜೀವರೂಪಿ ಸಂಸಾರ ಕಟ್ಟಿ ಕೊಂಡವನು. ಈ ಒಡಲುಕೊಂಡವನು ಸಂಸಾರ ತೂಗಿಸಲು ಹುಸಿಯನ್ನು ಸುಳ್ಳನ್ನು ಹೇಳುತ್ತಾನೆ.
ನೀನು ಎನ್ನನ್ನು ಹೀಗೆ ಮಾಡುತ್ತೇನೆಂದು ಜರಿದು ಬೈದು ಬೆದರಿಸಿ ನುಡಿಯಬೇಡ.

ಓ ದೇವ,
ನೀನೂ ನನ್ನಂತೆ ಒಡಲುಗೊಂಡು ಈ ಭೂಮಿಯಲ್ಲಿ ಮಾನವನಾಗಿ ಜನ್ಮ ತಳೆದು ನೋಡ.
ನನ್ನ ಬವಣೆ ನಿನಗೂ ತಿಳಿಯುತ್ತದೆ
ಇಲ್ಲಿ "ಒಡಲು" ಅನ್ನೋದನ್ನ "ಶರೀರ" ಅಂತ ಅರ್ಥೈಸಿ "ಒಡಲುಗೊಂಡವ" ಅಂದರೆ ಒಡಲನ್ನು ಹೊಂದಿದವನು ಅಂದರೆ (ನಮ್ಮ ಕೃಷ್ಣ ಹೇಳುವಂತೆ 🙂) "ಶರೀರಿ" ಅಥವಾ "ಮಾನವ" ಅಂತಂದ್ಕೋಬೇಕಾಗತ್ತೆ. ಈ ವಚನದಲ್ಲಿ ದಾಸಿಮಯ್ಯ, ಅವನ ಆರಾಧ್ಯ ದೈವವಾದ ರಾಮನಾಥನಿಗೇ ಎಷ್ಟು ಚೆನ್ನಾಗಿ challenge ಮಾಡ್ತಿದಾನೆ ನೋಡಿ. ಅವನು (ಬಹುಶಃ ಇದುವರೆಗೂ ತನಗೆ ಪ್ರತ್ಯಕ್ಷನಾಗಿರದ ಅಶರೀರಿಯಾದ) ರಾಮನಾಥನನ್ನು ಕುರಿತು ಈ ವಚನದಲ್ಲಿ ಹೇಳ್ತಿರೋದು ಹೀಗಿದೆ :

"ನೀನೊಬ್ಬ ಶರೀರಿ. (ಆದ್ದರಿಂದ) ನಿನಗೆ ಹಸಿವಾಗುತ್ತದೆ (ಅಂದರೆ ಅನೇಕ ರೀತಿಯ ಹಸಿವು ನೀರಡಿಕೆಗಳ ಬಾಧೆಗಳಿಗೆ ಒಳಗಾಗುತ್ತೀಯೆ). (ಶರೀರಿಯಾದ್ದರಿಂದ) ನೀನು ಸುಳ್ಳ - ಎಂದು ನೀನು ನನ್ನನ್ನುದ್ದೇಶಿಸಿ ಜರಿದು ಮಾತಾಡಬೇಡ ರಾಮನಾಥ. (ಒಮ್ಮೆ) ನೀನೂ ನನ್ನಂತೆ (ಈ ಲೋಕದಲ್ಲಿ) ಶರೀರಿಯಾಗಿ (ಹುಟ್ಟಿ) ನೋಡು. (ಆಗ ನಿನಗೇ ಗೊತ್ತಾಗುತ್ತದೆ ಅಂದರೆ ಇವೆಲ್ಲ ಯಾಕೆ ಎಂದು ನೀನೇ ಅನುಭವಿಸುವುದರಿಂದ ಆಗ ನಿನಗೆ ನನ್ನನ್ನು ಜರಿಯಬಾರದು ಎಂದು ತಿಳಿಯುತ್ತದೆ)".
ಒಡಲು ಎಂದರೆ ದೇಹ. ದೇಹ ಪಡೆದ ಮೇಲೆ ಹಸಿವು ಆಗಲೇಬೇಕು. ಇದು ದೇಹದ ಮಿತಿ. ಹುಸಿವ ಎಂದರೆ ಅಗತ್ಯವಾದಲ್ಲಿ ಸುಳ್ಳು ಹೇಳುವುದು ಮಾನವ ಮನಸ್ಸಿನ ಮಿತಿ. ಹೀಗೆಂದು ಹಳಿಯಬೇಡ ರಾಮನಾಥ! ನನ್ನ ಹಾಗೆ ದೇಹ ಹೊತ್ತು ಅನುಭವಿಸಿ ನೋಡು ಬದುಕಿನ ಸಂಕಷ್ಟಗಳನ್ನು! ಆ ನಂತರ ಬೇಕಿದ್ದರೆ ನನ್ನನ್ನು ಹೀಯಾಳಿಸಿ ಥಳಿಸು