ಜಯ ಹೇ ಶಂಕರ
ಧೀರ ತಪಸ್ವೀ
ಭಾರತಕ್ರಾಂತಿಯಶಸ್ವೀ
ವೇದಾಂತವ ಮಥನೈಸುತ
ಬೆಳಗಿದ
ದೇಶಾದ್ಯಂತ ಜಯಸ್ವೀ
ದೇವಿಯ ಒಲಿಸುತ
ಮಧುರಲಹರಿಯಲಿ
ವರಸ್ತುತಿಗೈದ ವಚಸ್ವೀ
ವಿಷ್ಣು-ಗಣೇಶ-ಶಿವಾದಿ
ಇಷ್ಟಗಳ
ಪದಷಟ್ಪದಿ ಸುನಮಸ್ವೀ
ಮಾಯೆಗೆ ಮಿಥ್ಯ್ಯಕೆ
ಮೋಹಕೆ ಮುದ್ಗರ
ಪ್ರಚಂಡ ವೀರ ತರಸ್ವೀ
ನಾಲ್ಕು ದಿಕ್ಕಿನಲಿ
ಗುರುಗಳ ನೇಮಿಸಿ
ಮನುಜರ ಪೊರೆವ ಮಹಸ್ವೀ
ಆದಿ ಶಂಕರನೆ
ಜಗದ್ಗುರುವೆ ನೀ
ಬ್ರಹ್ಮಾನಂದ ಪಯಸ್ವೀ
ಜಯ ಹೇ ಶಂಕರ
ಜಯ ಹೇ ಶಂಕರ
ಶಿವಾವತಾರ ತಪಸ್ವೀ
-श्रीशङ्करजयन्ती-